ವಿಜಯಪುರ: ಕಾಲುವೆಯಲ್ಲಿ ಆಯತಪ್ಪಿ ಯುವಕ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿ ಹತ್ತಿರ ನಡೆದಿದೆ. ಹಿರೇರೂಗಿ ಗ್ರಾಮದ 28 ವರ್ಷದ ಯುವಕ ಮಹಾದೇವ ಮುಂಡೋಡಗಿ ಕಾಲುವೆ ನೀರಲ್ಲಿ ಬಿದ್ದಿದ್ದಾನೆ. ಐಬಿಸಿ ಕಾಲುವೆಯಿಂದ ತನ್ನ ಜಮೀನಿಗೆ ಮೋಟಾರು ಮೂಲಕ ನೀರು ಹರಿಸುವ ಸಲುವಾಗಿ ಕಾಲುವೆಗೆ ತೆರಳಿದ್ದಾಗ ಆಯಾತಪ್ಪಿ ಹರಿಯುವ ನೀರಲ್ಲಿ ಬಿದ್ದಿದ್ದಾನೆ. ಆತನ ಶೊಧಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡಿಸಿದ್ದಾರೆ. ಇಂಡಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.