ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಆಗಿದೆ. ನಿನ್ನೆ ರಾತ್ರಿ 10 ಗಂಟೆಗೆ ಶುರುವಾದ ಮಳೆ ಮಧ್ಯರಾತ್ರಿ ವರೆಗೆ ಸುರಿದ ಮಳೆ ಹಿನ್ನಲೆ ನಗರಾದ್ಯಂತ ಹಲವು ಅವಾಂತರ ಸೃಷ್ಟಿಸಿದೆ. ಗುಡುಗು, ಸಿಡಿಲು ಸಹಿತ ಭಾರಿ ಮಳೆಯಿಂದಾಗಿ ವಿಜಯಪುರ ನಗರದ ಇಬ್ರಾಹಿಂ ನಗರದಲ್ಲಿ ಮನೆಗೆ ಮಳೆ ನೀರು ನುಗ್ಗಿದೆ.
ಮನೆಗೆ ನೀರು ನುಗ್ಗಿದ ಹಿನ್ನೆಲೆ ಜನರು ಪರದಾಟ ಅನುಭವಿಸಿದ್ದಾರೆ. ಅಲ್ಲದೇ, ಮನೆಯಲ್ಲಿದ್ದ ವಿವಿಧ ವಸ್ತುಗಳು ನೀರು ಪಾಲಾಗಿದೆ. ಈ ಹಿಂದೆ ಸೂಕ್ತ ಚರಂಡಿ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದರು.
ವಿಜಯಪುರದಲ್ಲಿ ಮಳೆ ಅವಾಂತರ | ಜನರು ಪರದಾಟ
![](https://karnataka1news.com/wp-content/uploads/2024/06/IMG-20240607-WA0003-860x1147.jpg)