ಬೆಂಗಳೂರು:
ನಮ್ಮ ಸಂಪ್ರಧಾಯದಂತೆ ಹೊಸದಾಗಿ ಮದುವೆಯಾದ ಮಹಿಳಿಯರು ಆಶಾಡ ಮಾಸದಲ್ಲಿ ಗಂಡನ ಮನೆಯಲ್ಲಿ ಇರಬಾರದು ನಿಯಮ ಇದ್ದು ಅತ್ತೆ ಹಾಗೂ ಸೋಸೆ ಮುಖನೋಡಬಾರದು ಎಂಬ ಭಾವನೆಗಾಗಿ ಸೋಸಿಗೆ ತವರಿಗೆ ಕಳಿಸಿಕೊಡುವುದು ಸಂಪ್ರಧಾಯವಾಗಿದೆ ಅದರಂತೆ ಇಲ್ಲಿ ಓರ್ವಳು ಮದುವೆಯಾದ ಮೊದಲ ವರ್ಷ ಆಶಾಡ ಬಂದಾಗ ತವರಿಗೆ ಹೋಗಿದ್ದಾಳೆ ಆದರೆ ತವರಿಗೆ ಬಂದ ಮಗಳು ಹಳೆಯ ಪ್ರೀಯಕರನೊಂದಿಗೆ ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
19 ವರ್ಷದ ಅನುಷಾ ಮತ್ತು 21 ವರ್ಷದ ವೇಣು ಮೃತ ದುರ್ದೈವಿಗಳು. ಇವರಿಬ್ಬರ ಪ್ರೀತಿಯನ್ನು ಒಪ್ಪದ ಕುಟುಂಬಸ್ಥರು, ಬೇರೆ ಯುವಕನೊಂದಿಗೆ ಯುವತಿಗೆ ಮದುವೆ ಮಾಡಿದ್ದರು. ಚೌಡರೆಡ್ಡಿ ಎಂಬ ವ್ಯಕ್ತಿ ಜೊತೆಯಲ್ಲಿ ಮದುವೆ ನಡೆದಿತ್ತು. ಪ್ರೀತಿಗೆ ನಿರಾಕರಿಸಿ ಬೇರೆ ಯುವಕನ ಜೊತೆಗೆ ಮದುವೆ ಮಾಡಿದ್ದರಿಂದ ಮನನೊಂದಿದ್ದ ಯುವತಿ, ತವರಿಗೆ ಬಂದಾಗ ಪ್ರೇಮಿ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎನ್ನಲಾಗಿದ್ದು ಪ್ರೀತಿ ಎಂಬ ಹುಚ್ಚು ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಈ ಜೋಡಿಗಳಿಂದ ಎರಡು ಕುಟುಂಬಗಳು ಕಂಗಾಲಾಗಿವೆ.