ಬೆಂಗಳೂರು:
ಸೋಮುವಾರ ನಡೆಯಲಿರುವ ಮಳೆಗಾಲ ಅಧಿವೇಶದಲ್ಲಿ ಆಡಳಿತ ಪಕ್ಷವಾದ ಕಾಂಗ್ರೇಸ್ ಸರ್ಕಾರದ ಸಾಲು-ಸಾಲು ನಡೆದ ಹಗರಣಗಳ ಬಗ್ಗೆ ವಿರೋಧ ಪಕ್ಷವಾದ ಬಿಜೆಪಿ ಮತ್ತು ಜೆಡಿಎಸ್ ಬಾರಿ ಪ್ರಮಾಣದಲ್ಲಿ ಹೋರಾಟ ಮಾಡಲು ಮುಂದಾಗುವ ಸಾಧ್ಯತೆ ಇದ್ದು ಎಲ್ಲಾ ರೀತಿಯಲ್ಲಿ ಸಜ್ಜಾಗಿದ್ದಾರೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಲಾಖಾ ಸಚಿವ ಬಿ ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ತಲೆದಂಡವೂ ಬಹುತೇಕ ಖಚಿತವಾಗಿದೆ. ಹಗರಣದಲ್ಲಿ ನೆರೆ ರಾಜ್ಯ ತೆಲಂಗಾಣದ ಪ್ರಮುಖರ ಹೆಸರುಗಳೂ ಬಯಲಿಗೆ ಬರುತ್ತಿವೆ. ಇದರ ಮಧ್ಯೆ ಯಾವುದೇ ಕ್ಷಣದಲ್ಲಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ದದ್ದಲ್ ರಾಜೀನಾಮೆ ನೀಡುವ ಸಾಧ್ಯತೆಯಿದೆ. ನಿಗಮದ ಅಧೀಕ್ಷಕ ಚಂದ್ರಶೇಖರನ್ ಡೆತ್ನೋಟ್ನಿಂದ ಬಯಲಿಗೆ ಬಂದ ಈ ಅಕ್ರಮದ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಹಿರಿಯ ಅಧಿಕಾರಿಗಳ ಬಂಧನವಾಗಿದ್ದು, ಎಸ್ಐಟಿ ತನಿಖೆ ಜತೆಗೆ ಸಿಬಿಐ ಕೂಡ ಪ್ರಕರಣದ ಜಾಡಿನ ಬೆನ್ನತ್ತಿದೆ. ಚುನಾವಣೆ ಸಂದರ್ಭದಲ್ಲಿ ನಡೆದಿರುವ ಈ ಅಕ್ರಮ ವಹಿವಾಟಿನ ಪ್ರಕರಣವನ್ನು ಪ್ರತಿಪಕ್ಷ ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ಕಾಂಗ್ರೆಸ್ ಸರಕಾರವನ್ನು ತೀವ್ರ ಮುಜುಗರ ಹಾಗೂ ಇಕ್ಕಟ್ಟಿಗೆ ಸಿಲುಕಿಸಿದೆ.
ಒಂದು ವೇಳೆ ಬಸನಗೌಡ ದದ್ದಲ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡದೆ ಹೋದರೆ ಅಧಿವೇಶನಲ್ಲಿ ವಿರೋಧ ಪಕ್ಷದವರು ಮಾತ್ರ ದದ್ದಲ್ ರಾಜಿನಾಮೆ ಬಗ್ಗೆ ಗದ್ದಲ್ ಮಾಡುವುದು ಮಾತ್ರ ಸತ್ಯವಾಗಿದೆ.