ವಿಜಯಪುರ : ಬೈಕ್ ಸ್ಕಿಡ್ ಆಗಿರುವ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತಾಜಪುರ ಕ್ರಾಸ್ ಬಳಿ ನಡೆದಿದೆ.
ವಿಜಯಪುರ ನಗರದ ಮೆಹಬೂಬ ನಗರದ ಯುವ ವರುಣ ಅಗಸರ(25) ಸಾವನ್ನಪ್ಪಿದ್ದಾನೆ. ಅಥಣಿ ತಾಲೂಕಿನ ಕಿಳೇಗಾಂವಗೆ ದೇವರ ದರ್ಶನಕ್ಕೆ ತೆರಳಿದ್ದ ಯುವಕರು ಮರಳಿ ಬರುವಾಗ ಈ ದುರ್ಘಟನೆ ಆಗಿದೆ. ಬಸವರಾಜ ಅಗಸರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.