ವಿಜಯಪುರ: ಕಾಂಗ್ರೆಸ್ ಭಾರತ ಜೋಡೋ ಯಾತ್ರೆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ಮಾಡಿದರು.
ವಿಜಯಪುರದ ಸೈನಿಕ ಶಾಲೆಯಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್ ಭಾರತ ತೋಡೋ ಮಾಡಿದೆ. ಎರಡು ದೇಶಗಳನ್ನ ಬೇರ್ಪಡಿಸಿ ಭಾರತ ತೋಡೋ ಮಾಡಿದೆ. ಈಗ ಕಾಂಗ್ರೆಸ್ ಜೋಡೋ ಯಾತ್ರೆ ಮಾಡ್ತಿರೋದು ವಿಪರ್ಯಾಸ ಎಂದರು. ಸಮಾಜದಲ್ಲಿ ಕಾಂಗ್ರೆಸ್ ಕ್ಷೋಭೆ ಉಂಟು ಮಾಡಿದೆ. ಭಾರತ ಒಡೆದ ಗಾಯದ ಬರೆಯನ್ನ ಯಾರು ಯಾರು ಮರೆತಿಲ್ಲ. ಅವರಿಗೆ ರಾಜಕಾರಣಕ್ಕಾಗಿ, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಭಾರತ ಜೋಡೋ ಯಾತ್ರೆ ಮಾಡಿದ್ದು, ಒಳ ಮರ್ಮ ಮುಚ್ಚಿಕೊಳ್ಳಲು ಕಾಂಗ್ರೆಸ್ ಭಾರತ ಜೋಡೋ ಹೆಸರು ಬಳಕೆ ಮಾಡ್ತಿದೆ ಎಂದರು.
ಅಲ್ಲದೇ, ನಾನು, ಬಿಎಸ್ವೈ ಜಂಟಿ ಪ್ರವಾಸ ಮಾಡುತ್ತೇವೆ. ದಸರಾ ಮುಗಿದ ತಕ್ಷಣವೇ ಜಂಟಿ ಪ್ರವಾಸ ಆರಂಭಿಸುತ್ತೇವೆ ಎಂದು ಕರ್ನಾಟಕಒನ್ನ್ಯೂಸ್ಗೆ ಮಾಹಿತಿ ತಿಳಿಸಿದರು.