ವಿಜಯಪುರ: ಕೋರಿಯರ್ ಅಂಗಡಿಯ ಬೀಗ್ ಒಡೆದು ನಗದು ದೋಚಿಕೊಂಡು ಕಳ್ಳ ಪರಾರಿಯಾಗಿರುವ ಘಟನೆ ವಿಜಯಪುರ ನಗರದ ದಾತ್ರಿ ಮಸೀದಿ ಎದುರು ನಡೆದಿದೆ.
ಡಿಟಿಡಿಸಿ ಕೋರಿಯರ್ ಅಂಗಡಿಯ ಮಾಲೀಕ ಶಬ್ಬೀರ್ ಎಂಬುವರ ಅಂಗಡಿಯಲ್ಲಿ ಕಳ್ಳತನ ಆಗಿದೆ. ಇನ್ನು ಅಂಗಡಿಯಲ್ಲಿದ್ದ 31 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಅಲ್ಲದೇ, ಕಳ್ಳನ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.