ವಿಜಯಪುರ: ಜೈಲಿನಲ್ಲಿರುವ ಕೈದಿಗೆ ಅನಧಿಕೃತವಾಗಿ ಮೊಬೈಲ್ ನೀಡಲು ಬಂದಿದ್ದ ಓರ್ವನ್ನು ಜೈಲ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ವಿಜಯಪುರ ನಗರದ ದರ್ಗಾ ಜೈಲ್ ಆವರಣದಲ್ಲಿ ನಡೆದಿದೆ.
ತೌಫಿಕ್ ರಫೀಕ್ ಮುಜಾವರ್ ಬಂಧಿತ ಆರೋಪಿ. ಇನ್ನೂ ಕೈದಿ ಸಾಧಿಕ್ ಇನಾಮದಾರ್ಗೆ ಅನಧಿಕೃತವಾಗಿ ಜೈಲ್ ಆವರಣದಿಂದ ಜೈಲ್ ಒಳಗೆ ಮೊಬೈಲ್ ಎಸೆಯಲು ಬಂದಾಗ್ ಜೈಲ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.