ವಿಜಯಪುರ: ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಲಕ್ಷಾಂತರ ಮೌಲ್ಯದ ಚಿನ್ನ, ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಜಯಂತಿ ನಗರದಲ್ಲಿ ನಡೆದಿದೆ.
ದೇವು ಮ್ಯಾಗೇರಿ ಎಂಬುವರ ಮನೆಯಲ್ಲಿ 2 ತೊಲಿ ಚಿನ್ನ, 20 ಸಾವಿರ ನಗದು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಇನ್ನೂ ಮನೆಯ ಕಿಟಕಿಯಯನ್ನು ಕಬ್ಬಿಣದ ರಾಡ್ನಿಂದ ಮುರಿದು ಒಳಗೆ ನುಗ್ಗಿ ಚಿನ್ನ, ನಗದು ದೋಚಿಕೊಂಡು ಕಾಲ್ಕಿತ್ತಿದ್ದಾರೆ. ಹೊರ್ತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.