ವಿಜಯಪುರ: ಸ್ಟೇಷನರಿ ಐಟಂ ಖರೀದಿಗೆ ಹೋಗಿದ್ದ ವೇಳೆ ಅಂಗಡಿಯವರೊಂದಿಗೆ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ರಾಜೇಶ್ವರಿ ಗಾಯಕವಾಡ ಗಲಾಟೆ ಮಾಡಿಕೊಂಡಿರುವ ಘಟನೆ
ವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್ ಬುಧವಾರ ಸಂಜೆ ನಡೆದಿದೆ.
ಗಾಯಕವಾಡ್ ಹಾಗೂ ಅವರ ಸ್ನೇಹಿತೆ ಇಬ್ಬರೂ ಹೋಗಿದ್ದ ವೇಳೆ ಉಮದಿ ಸೂಪರ್ ಮಾರ್ಕೆಟ್ ನಲ್ಲಿ ಕಾಸ್ಮೆಟಿಕ್ ಐಟಂ ಖರೀದಿಗೆ ಹೋಗಿದ್ದ ವೇಳೆ ಗಲಾಟೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಕಾಸ್ಮೆಟಿಕ್ ವಸ್ತುಗಳ ಪರಿಶೀಲನೆ ವೇಳೆ ಸೂಪರ್ ಮಾರ್ಕೆಟ್ ಸಿಬ್ಬಂದಿಗೂ ರಾಜೇಶ್ವರಿಗೂ ವಾಗ್ವಾದ ಆಗಿದೆ. ಬಳಿಕ 8 ರಿಂದ 10 ಗೂಂಡಾಗಳನ್ನು ಕರೆಯಿಸಿ ಸೂಪರ್ ಮಾರ್ಕೆಟ್ ಮಾಲೀಕ ಮಲ್ಲಿಕಾರ್ಜುನ್ ಉಮದಿ ಹಾಗೂ ಅವರ ಪುತ್ರ ಪ್ರಶಾಂತ್ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ, ಅಣತಿ ದೂರದಲ್ಲಿ ನಿಂತು ರಾಜೇಶ್ವರಿ ಗಾಯಕವಾಡ ಹಲ್ಲೆಗೈದಿರುವ ಆರೋಪದ ಮಾತುಗಳು ಕೇಳಿ ಬಂದಿವೆ.
ಗಲಾಟೆಯಾಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಆದರ್ಶನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.