ವಿಜಯಪುರ: ಚಹಾ ಅಂಗಡಿಯ ಎದುರು ನಿಲ್ಲಿಸಿದ ಬೈಕ್ನ್ನು ಕಳ್ಳರು ಕಳ್ಳತನಗೈದು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ನಡೆದಿದೆ.
ಸತೀಶಕುಮಾರ ಸಿಂಗ್ ಎಂಬುವವರ ಬೈಕ್ ಕಳ್ಳತನವಾಗಿದೆ. ಇನ್ನ KA 28 EX 2701 ನಂಬರಿನ ಬೈಕ್ ಚಹಾದ ಅಂಗಡಿಯ ಬಳಿ ನಿಲ್ಲಿಸಿ ಬಸ್ ನಿಲ್ದಾಣದಲ್ಲಿ ಎಂದಿನ ಕೆಲಸ ಮುಗಿಸಿಕೊಂಡು ಬಂದು ನೋಡಿದ್ರೇ ಬೈಕ್ ಕಳ್ಳತನವಾಗಿದೆ. ಸುತ್ತಮುತ್ತಲಿನ ಕಡೆಗೆ ವಿಚಾರಿಸಿದ್ರೂ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.