ವಿಜಯಪುರ: ಡೀಸೆಲ್ ಬಾಕಿ ಹಣ ನೀಡಬೇಕೆಂದು ವ್ಯಕ್ತಿಯನ್ನು ಅರೆಬೆತ್ತಲೆ ಮಾಡಿ ಡೀಸೆಲ್ ಬಂಕ್ ನಲ್ಲಿ ಮಾಲೀಕರು ಕೂಡಿಸಿರುವ ಘಟನೆ
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಭೋಸಲೆ ಪೆಟ್ರೋಲ್ ಡೀಸೆಲ್ ಬಂಕ್ ನಲ್ಲಿ ಈ ಘಟನೆ ನಡೆದಿದ್ದು, ಭರತ ಭೋಸಲೆ ಎಂಬುವವರಿಗೆ ಸೇರಿದ ಬಂಕ್ ಇದಾಗಿದೆ. ಅಲ್ಲದೇ, ಮೌನೇಶ್ ಪತ್ತಾರ ಎಂಬ ವ್ಯಕ್ತಿಯನ್ನು ಅರೆಬೆತ್ತಲೆಗೊಳಿಸಿ ಬಂಕ್ ನವರು ಕೂಡಿಸಿದ್ದಾರೆ. 10 ರಿಂದ 15 ಲಕ್ಷ ಡೀಸೆಲ್ ಬಾಕಿ ಹಣ ನೀಡುವಂತೆ ಒತ್ತಾಯಿಸಿ ಭೋಸಲೆ ಬಂಕ್ ನವರು ಈ ಕೃತ್ಯ ಕಾಯಕವಿಲ್ಲದವರು ಎಸಗಿದ್ದಾರೆ. ಕಳೆದ 12 ದಿನಗಳಿಂದ ಮೌನೇಶ್ ಪತ್ತಾರನನ್ನು ಅರೆಬೆತ್ತಲೆಗೊಳಿಸಿ ಬಂಕ್ ನಲ್ಲಿ ಕೂಡಿ ಹಾಕಿದ್ದಾರೆ. ಇನ್ನು ತಮಿಳುನಾಡು ಮೂಲಕ ಶಿವಶಕ್ತಿ ಬೋರ್ ವೆಲ್ಸ್ ನಲ್ಲಿ ಮೌನೆರಶ ಕೆಲಸ ಮಾಡುತ್ತಿದ್ದಾನೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಆಗಿದೆ.
![](https://karnataka1news.com/wp-content/uploads/2023/06/IMG_20230626_130344-799x1024.jpg)