ವಿಜಯಪುರ: ಚಾಕು ಇರಿತಕ್ಕೆ ಒಳಗಾಗಿದ ಯುವಕನಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ನಗರದ ಯೋಗಾಪುರ ಕಾಲೋನಿ ನಿವಾಸಿ ಸುನೀಲ ರಜಪೂತ ಅಸುನೀಗಿದ್ದಾನೆ. ಅಲ್ಲದೇ, ಮತ್ತೋರ್ವನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ, ಕಳೆದ ಎರಡು ದಿನಗಳ ಹಿಂದೆ ಮನಗೂಳಿ ಬೈಪಾಸ್ ಬಳಿ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದರು. ಇದೀಗ್ ಸುನೀಲ ಅಸುನೀಗಿದ್ದಾನೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.