ವಿಜಯಪುರ: ಮನೆಯಲ್ಲಿ ಆಕಸ್ಮಿಕ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ವಿಜಯಪುರ ನಗರದ ಕಲಾದಗಿ ಓಣಿಯಲ್ಲಿ ನಡೆದಿದೆ. ದಾದಾಪೀರ್ ಮುಜಾವರ್ ಎಂಬುವರಿಗೆ ಸೇರಿದ ಲಕ್ಷಾಂತರ ಮೌಲ್ಯದ ಮನೆ ವಸ್ತುಗಳು ಭಸ್ಮವಾಗಿವೆ. ಇನ್ನೂ ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಅವಘಡ ಸಂಭವಿಸಿದ್ದು, ಮನೆಯಲ್ಲಿದ ಟಿವಿ, ವಾಸ್ಸಿಂಗ್ ಮಷಿನ್, ಪ್ರೀಡ್ಜ್ ಸೇರಿದಂತೆ ವಿವಿಧ ವಸ್ತುಗಳು ಹಾನಿಯಾಗಿವೆ. ಅದಕ್ಕಾಗಿ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ದಾದಾಪೀರ ಮನವಿ ಮಾಡಿದರು. ಎಪಿಎಂಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/10/IMG_20231002_202756-1024x597.jpg)