ವಿಜಯಪುರ: ಶಾರ್ಟ್ ಸರ್ಕ್ಯೂಟ್ನಿಂದ ಜೆನರಲ್ ಸ್ಟೋರ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿ, ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿ ಆಗಿರುವ ಘಟನೆ
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಲೋಣಿ ಕಾಂಪ್ಲೆಕ್ಸ್ನಲ್ಲಿ ನಡೆದಿದೆ. ಮಹಮ್ಮದ್ ಹಸನ್ ಬಾಗವಾನ್ ಎಂಬುವರ ಅಂಗಡಿಯಲ್ಲಿ ಘಟನೆ ಆಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ನಡೆದ ಬೆಂಕಿ ಅವಘಡದಲ್ಲಿ
ಸುಮಾರು ನಾಲ್ಕು ಲಕ್ಷಕ್ಕಿಂತ ಹೆಚ್ಚಿನ ವಸ್ತುಗಳು ಭಸ್ಮವಾಗಿವೆ. ಪ್ಲಾಸ್ಟಿಕ್, ಜೆನರಲ್ ವಸ್ತುಗಳು, ನೋಟ್ ಬುಕ್, ಬ್ಯಾಗ್ ಸೇರಿದಂತೆ ಅಪಾರ ಹಾನಿ ಉಂಟಾಗಿದೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಜೆನರಲ್ ಅಂಗಡಿಯಲ್ಲಿ ಧಗಧಗ ಬೆಂಕಿ
![](https://karnataka1news.com/wp-content/uploads/2024/03/IMG-20240317-WA0007.jpg)