ವಿಜಯಪುರ: ವಿದ್ಯುತ್ ಸ್ಪರ್ಶಿಸಿ ಮಂಗವೊಂದು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಕಣಕಾಲ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರಿಂದ ಸ್ಥಳಕ್ಕೆ ದೌಡಾಯಿಸಿ ವಿದ್ಯುತ್ ತಗುಲಿ ಸಾವನ್ನಪ್ಪಿದ ಮಂಗ ಹೊರತೆಗೆಯಲು ಸ್ಥಳೀಯರು ಹರಸಾಹಸಪಟ್ಟರು. ಅಲ್ಲದೇ, ಜನತೆಯನ್ನು ಹತ್ತಿರ ಸುಳಿಯಲು ಇನ್ನೆರಡು ಮಂಗಗಳು ಬಿಡಲಿಲ್ಲ. ಆದ್ರೂ, ಹರಸಾಹಸ ಪಟ್ಟು ಮೃತ ಮಂಗನ ದೇಹವನ್ನು ಹೊರತೆಗೆದು ಹನುಮಂತ ಸ್ವರೂಪಿ ಮಂಗ ಎಂಬ ಕಾರಣಕ್ಕಾಗಿ ಧಾರ್ಮಿಕ ವಿಧಿ ವಿಧಾನದ ಮೂಲಕ ಅಂತ್ಯಕ್ರಿಯೆ ನಡೆಸಿದರು. ಅದಕ್ಕೆ ಟೋಪಿ, ಟವೆಲ್, ಶರ್ಟ್, ಪ್ಯಾಂಟ್ ತೊಡಿಸಿ ವಾಹನದ ಮೇಲೆ ಕೂಡಿಸಿ ವಾದ್ಯ ಮೇಳಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ, ಅಂತ್ಯಕ್ರಿಯೆ ಮಾಡಿದರು.
![](https://karnataka1news.com/wp-content/uploads/2023/06/IMG-20230603-WA0023-768x1024.jpg)