ವಿಜಯಪುರ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ವೇಳೆ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ನಗರದ ಸಂಸ್ಕೃತ ಕಾಲೋನಿಯಲ್ಲಿ ನಡೆದಿದೆ. ಅನಿಲ ರಾಠೋಡ ಬಂಧಿತ ಆರೋಪಿ. ಇನ್ನೂ ಖಾಲೀದ ಇನಾಮದಾರ್ ಪರಾರಿಯಾಗಿದ್ದಾನೆ. ಇನ್ನೂ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವಾಗ ಪೊಲೀಸರು ದಾಳಿಗೈದು 2800 ಮೌಲ್ಯದ 280 ಗ್ರಾಂ ಗಾಂಜಾ ಜಪ್ತಿಗೈದಿದ್ದಾರೆ. ಈ ಕುರಿತು ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.