ವಿಜಯಪುರ: ಜಾನುವಾರುಗಳನ್ನು ಬೇಟೆಯಾಡುತ್ತಿದ್ದ ಹಾಗೂ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಗಂಡು ಚಿರತೆ ಬೋನಿಗೆ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಣಬೂರ ಗ್ರಾಮದಲ್ಲಿ ನಡೆದಿದೆ. ಒಂದು ವರ್ಷದಿಂದ ದೇವರಗೆಣ್ಣೂರ, ಬಬಲಾದಿ, ಗುಣದಾಳ ಸೇರಿದಂತೆ ಜಮೀನಿನಲ್ಲಿ ಓಡಾಡಿ ಕುರಿಮರಿ, ನಾಯಿಮರಿಗಳು ಬಲಿಯಾಗಿದ್ದವು. ಚಿರತೆ ಸೆರೆಗಾಗಿ 50 ಸ್ಥಳದಲ್ಲಿ ಬೋನು ಬದಲಿಸಿದರು. ಕೊನೆಗೂ ನಿನ್ನೆ ಕಣಬೂರ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿದೆ.