ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ಹಸಿ ಕಬ್ಬಿನಿಂದ ಹೊಡೆದು ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಉತ್ನಾಳ ಗ್ರಾಮದಲ್ಲಿ ನಡೆದಿದೆ. ವಿಜಯಪುರ ನಗರ ನಿವಾಸಿ ಈರಯ್ಯ ಮಲ್ಲಯ್ಯ ಮಠ ಹತ್ಯೆಯಾಗಿರುವ ದುರ್ದೈವಿ. ಅಲ್ಲದೇ, ಗಾನಯ್ಯ, ಸಿದ್ದಯ್ಯ ಹಾಗೂ ಇನ್ನಿತರ ಕೂಡಿಕೊಂಡು ಕಬ್ಬಿನ ಜಮೀನಿನಲ್ಲಿ ಕಬ್ಬಿನಿಂದ ಹೊಡೆದು ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಮೃತನ ಕುಟುಂಬಸ್ಥರ ಆರೋಪ ಆಗಿದೆ. ಅಲ್ಲದೇ, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.