ವಿಜಯಪುರ: ಮ್ಯಾನೇಜಿಂಗ್ ಪಾರ್ಟ್ನರೊಬ್ಬರಿಗೆ ಬರೋಬ್ಬರಿ 2,29,87,000 ಕೋಟಿ ನಗದು ವಂಚನೆಗೈದಿರುವ ಘಟನೆ ಗುಮ್ಮಟನಗರಿಯಲ್ಲಿ ನಡೆದಿದೆ. ವಿಜಯಪುರ ನಗರದ ಸೊಲ್ಲಾಪುರ ರಸ್ತೆಯ ನಿವಾಸಿ ಅಮಗೌಡ ಪಾಟೀಲ ವಂಚನೆ ಹೋದವರು. ಬೆಂಗಳೂರು ಮೂಲದ ಸರ್ವನನ ಮಾಣಿಕ್ಯ, ನಕಾಶ ಗ್ರೋವರ್, ರಾಹುಲ್ ಕೊಂಡ್ಲಾ ವಂಚನೆ ಮಾಡಿದವರು. ಘಟನೆ ವಿವಿರ: ವಿಜಯಪುರದ ಸಾಯಿ ಅಸೋಸಿಯೇಷ್ಟ್ ಪಾರ್ಟ್ನರಾಗಿ ಅಮಗೌಡ ಪಾಟೀಲ ಸೇರಿದಂತೆ ಉಳಿದವರು ಉದ್ಯಮ ಮಾಡುತ್ತಾರೆ. ಆದ್ರೆ, ಆರೋಪಿಗಳಾದ ಮೂವರು ಪ್ಲ್ಯಾನ್ ಮಾಡಿ ಅಮಗೌಡ್ರಿಗೆ ರೈತರಿಂದ ಖರೀದಿಸಿದ ಜಮೀನಿನಲ್ಲಿ ವಿಂಡ್ ಪವರ್ ಅಳವಡಿಸಲು ಜಮೀನು ಬೇಕಾಗಿದೆ ಎಂದು ನಂಬಿಸುತ್ತಾರೆ. ಅಲ್ಲದೇ, ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಹೊಸಟ್ಟಿ ಗ್ರಾಮದ ಸುತ್ತಮುತ್ತಲಿನ ಕಡೆಗೆ 73 ಎಕರೆ ಮಿಂಡ್ಮಿಲ್ಲ ಪವರ್ ಸ್ಥಾಪಿಸಲು ಜಮೀನು ಬೇಕಿದೆ ಎಂದು ಅಮಗೌಡರನ್ನು ಸಂಪರ್ಕಿಸಿ 38 ಎಕರೆ 7 ಗುಂಟೆ ಜಾಗವನ್ನು ಕರಾರು ಮಾಡಿಕೊಂಡಿರುತ್ತಾರೆ. ಎಕರೆಗೆ 22, 25,000 ರಂತೆ ಜಮೀನಿನ ಖರೀದಿಸಿದ್ದಾರೆ. ಆದ್ರೇ, ಕರಾರುವಾಕ್ಕಾಗಿ ಓಂ ಹಾಕದೇ ವಂಚನೆ ಮಾಡಿದ್ದಾರೆ. ಇನ್ನು 11ಇ ಹಾಕಲು ಕಂಪನಿಯ ಹೆಸರು ನಮೂದಿಸಿಲ್ಲ. ಅಲ್ಲದೇ, 73 ಎಕರೆ ಜಮೀನು ಖರೀದಿ ಹಿನ್ನೆಲೆ 38 ಎಕರೆ 7ಗುಂಟೆ ಜಮೀನಿಗೆ 1,86,00,000, ಸೇವಾ ಶುಲ್ಕ 33,87,000, ಜಮೀನು ಮಾರಾಟಕ್ಕಾಗಿ ಕಂಪನಿಗೆ 10 ಲಕ್ಷ ಸೇರಿದಂತೆ ಸಿಬ್ಬಂದಿಗಳ ಸಂಬಳ ಒಟ್ಟು 2,29,87,000 ನಗದು ಮೋಸ ಮಾಡಿದ್ದಾರೆ ಎಂದು ಅಮಗೌಡ ಪಾಟೀಲ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.