ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೃಷ್ಣಾ ನದಿ ತೀರದ ನಾಗರಾಳ ಗ್ರಾಮದಲ್ಲಿ ಮೊಸಳೆಗೆ ವ್ಯಕ್ತಿ ಬಲಿಯಾಗಿರುವ ಘಟನೆ ನಡೆದಿದೆ.
ಬಲಿಯಾದವನನ್ನು ಮಲ್ಲನಗೌಡ ಬಿರಾದಾರ (47) ಎಂದು ಗುರ್ತಿಸಲಾಗಿದೆ. ಎರಡು ದಿನಗಳ ಹಿಂದೆಯೇ ಮೊಸಳೆ ಈತನನ್ನು ಕೃಷ್ಣಾ ನದಿಯೊಳಕ್ಕೆ ಎಳೆದೊಯ್ದಿತ್ತು. ವಿಷಯ ತಿಳಿದ ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದೊಂದಿಗೆ, ಸ್ಥಳೀಯ ಈಜುಗಾರರ ನೆರವಿನಿಂದ ಶವವನ್ನು ಹೊರಗಡೆಗೆ ತೆಗೆದಿದ್ದಾರೆ. ಇನ್ನು ಮೊಸಳೆ ಮಲ್ಲನಗೌಡರ ದೇಹದ ಕೈ, ಕಾಲು ಸಂಪೂರ್ಣ ತಿಂದು ಹಾಕಿದೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.