ವಿಜಯಪುರ: ನಾಯಿಗೆ ಕಲ್ಲು ಎಸೆದಿರುವ ಪರಿಣಾಮ ಓರ್ವನ ಮೇಲೆ ನಾಲ್ವರು ಹಲ್ಲೆಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ಮದಭಾವಿ ಗ್ರಾಮದಲ್ಲಿ ಶುಕ್ರವಾರ 8:30 ಗಂಟೆಗೆ ನಡೆದಿದೆ. ಸಿದರಾಯ ಮಡಿವಾಳರ ಹಲ್ಲೆಗೊಳಗಾದವರು. ಇನ್ನು ಮಲ್ಲಪ್ಪ ಅಗಸರ, ಸಿದ್ದಪ್ಪ ಅಗಸರ, ಶಾಂತವ್ವ ಅಗಸರ, ಗೀತಾ ಅಗಸರ ವಿರುದ್ಧ ಕೇಸ್ ದಾಖಲು ಆಗಿದೆ. ಅಲ್ಲದೇ, ಮನೆಯ ಎದುರು ಸಿದರಾಯಗೆ ನಾಯಿ ಕಡಿಯಲು ಬಂದಾಗ ಕಲ್ಲು ಎಸೆದಿದ್ದಾನೆ. ಅದಕ್ಕಾಗಿ ಕೋಪಕೊಂಡು ನಾಲ್ವರು ಸಿದರಾಯನ ಮೇಲೆ ಕೊಡಲಿ, ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿಜಯಪುರ ನಗರದ ಎಸ್ಪಿ ಕಚೇರಿಯಿಂದ ಶನಿವಾರ 1:30 ಗಂಟೆಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)