ವಿಜಯಪುರ: ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು ಗಸ್ತು ತಿರುಗಲು ಬಂದಾಗ ಮಕ್ಕಳು ರಸ್ತೆ ಮೇಲೆ ಕುಳಿತಿದ್ದನ್ನು ನೋಡಿ ಕೆಟ್ಟು ನಿಂತ ಬಸ್ಸನ್ನು ಸ್ವತ ತಾನೆ ಮುಂದೆ ನಿಂತು ಮೇಸ್ತ್ರಿಯನ್ನು ಕರೆಯಿಸಿ ಕೆಟ್ಟು ನಿಂತ ಬಸ್ಸನ್ನು ರಿಪೇರಿ ಮಾಡಿಸಿ ಎಲ್ಲರನ್ನು ಅದೆ ಬಸ್ಸಿನಲ್ಲಿ ತವರೂರಿಗೆ ಕಳುಹಿಸಿ ಮಾನವಿಯತೆ ಮೆರೆದ ಘಟನೆ ವಿಜಯಪುರ ಜಿಲ್ಲೆ ಆಲಮಟ್ಟಿ ಡ್ಯಾಂ ನಲ್ಲಿ ನಡೆದಿದೆ.
ಗೋಕಾಕ ತಾಲೂಕಿನ ಕೊಣ್ಣೂರಿನ ಶಾಂತಿಸಾಗರ ಶಾಲೆಯ ವಿದ್ಯಾರ್ಥಿಗಳು ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕೆ ಒಪ್ಪಂದದ ಮೆರೆಗೆ ಗೋಕಾಕ ಡಿಪೋದ ಬಸ್ ನಲ್ಲಿ ಬಂದಿದ್ರು. ಆಲಮಟ್ಟಿ ಡ್ಯಾಂನಲ್ಲಿ ಬಸ್ಸು ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತಿತ್ತು. ಅಷ್ಟರಲ್ಲಿ ಗಸ್ತು ತಿರುಗಲು ಬಂದ ನಿಡಗುಂದಿ ಪಿ,ಎಸ್,ಐ, ಖಾಜು ವಾಲಿಕಾರ ತಾವೇ ಸ್ವತ ಮುಂದೆ ನಿಂತು ಪೋನ್ ಕರೆ ಮಾಡಿ ಮೇಸ್ತ್ರಿ ಯನ್ನು ಕರೆಯಿಸಿ ರೀಪೆರಿ ಮಾಡಿಸಿದ್ದಾರೆ. ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೆಮ್ಮದಿಯಿಂದ ಊರು ಸೇರಿದ್ದು, ಕರ್ತವ್ಯದ ಮದ್ಯೆಯೂ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗೆ ಧನ್ಯವಾದ ತಿಳಿಸಿದ್ದಾರೆ.