ವಿಜಯಪುರ: ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯ ಹಿನ್ನೆಲೆ ವಿಜಯಪುರ ನಗರದ ಜ್ಞಾನಯೋಗಾಶ್ರಮದಿಂದ ಸೈನಿಕ ಶಾಲೆಯ ವರೆಗೂ ಶ್ರೀಗಳ ಪಾರ್ಥಿವ ಶರೀರ ಮಂಗಳವಾರ ಮೆರವಣಿಗೆ ನಡೆಯಿತು. ಸೈನಿಕ ಶಾಲೆಯಲ್ಲಿ ಭಕ್ತರಿಗೆ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆ ವೇಳೆಯಲ್ಲಿ ಅಪಾರ ಜನ ಸಾಗರವೇ ಹರಿದು ಬರುತ್ತಿದೆ. ಹರಿದು ಬರುತ್ತಿರುವ ಜನ ಸಾಗರ ನಡುವೆ ಶ್ರೀಗಳ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಸೈನಿಕ ಶಾಲೆಗೆ ತರಲಾಯಿತು. ಅಲ್ಲದೇ, ಅಹಿತಕರ ಘಟನೆಗಳು ಆಗದಂತೆ ನಗರಾದ್ಯಂತ ಬೀಗಿ ಪೊಲೀಸ ಬಂದೋಬಸ್ತ್ ಕೈಗೊಳ್ಳಲಾಗಿದೆ.