ವಿಜಯಪುರ: ಅಯೋಧ್ಯೆಯ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಅಂಗಡಗೇರಿಯ ಸಂಗಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ ನೂರಾರು ವರ್ಷಗಳಿಂದ ನೂರಾರು ಕೋಟಿ ಹಿಂದುಗಳ ಭಾವನೆಯ ಮಂದಿರ ರಾಮಮಂದಿರ ಇಂದು ಪ್ರಾಣ ಪ್ರತಿಷ್ಠೆ ಆಗಿರುವುದು ಸಂತೋಷಕರ ಸಂಗತಿ, ಇಡೀ ದೇಶ ಈ ದಿನ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿರುವುದು ನೋಡಿದರೆ ಇದು ಕೇವಲ ರಾಮಮಂದಿರವಲ್ಲ ರಾಷ್ಟ್ರ ಮಂದಿರ ಎಂಬುದು ಇಂದು ಸಾಬೀತಾಗಿದೆ ಎಂದರು. ವೇದಮೂರ್ತಿ ರುದ್ರಸ್ವಾಮಿ ಹೀರೆಮಠ ಅವರು ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಬಂಗಾರಪ್ಪಗೌಡ ಪಾಟೀಲ, ನಾಗರಾಜ ಪಾಟೀಲ, ಪ್ರಭುಗೌಡ ಹಡ್ಲಗೇರಿ, ಬಸನಗೌಡ ಪಾಟೀಲ, ಸಿದ್ದು ಕೊಳಗೇರಿ, ರಾಜು ದೇಸಾಯಿ, ಮಹಾದೇವ ಗಬಸವಳಗಿ, ಹಣಮಂತ ಪೂಜಾರಿ, ಇತರರು ಇದ್ದರು.