ವಿಜಯಪುರ: ಗಾಳಿಗೆ ಮನೆಯ ಮೇಲಿನ ಕಲ್ಲು ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ವಿಜಯಪುರದ ಹೌಸಿಂಗ್ ಬೋರ್ಡ್ ಬಳಿಯ ತೋಟದ ಮನೆಯಲ್ಲಿ ನಡೆದಿದೆ.
ಸಚಿನ್ ಮಹಾಂತೇಶ ಸೊನ್ನದ ಮೃತಪಟ್ಟಿರುವ ಬಾಲಕ. ಇನ್ನು ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿ ಗಾಳಿಯ ಹೊಡೆತಕ್ಕೆ ಈ ಅವಘಡ ನಡೆದಿದೆ. ತೋಟದ ಮನೆಗೆ ಪತ್ರಾಸ್ ಅಳವಡಿಸಿ ಮೇಲೆ ಕಲ್ಲು ಇಡಲಾಗಿತ್ತು. ಪತ್ರಾಸ್ ಮೇಲಿನ ಕಲ್ಲು ಬಾಲಕನ ಎದೆಯ ಮೇಲೆ ಬಿದ್ದು ಮೃತಪಟ್ಟಿದ್ದಾನೆ. ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.