ವಿಜಯಪುರ: ಬೈಕ್ ಮೇಲೆ ಹೋಗುತ್ತಿದ್ದ ಅಣ್ಣ ತಂಗಿಯನ್ನು ಹತ್ಯೆಗೈದಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್.ಡಿ. ಆನಂದಕುಮಾರ ಮಾಹಿತಿ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಮಕ್ಕಳ ಟಿಸಿ ತರಲು ಹೋಗುತ್ತಿದ್ದ ರಾಜಶ್ರೀ, ನಾನಾಗೌಡ ಯರಗಲ್ಲ ಬೈಕ್ಗೆ ಶಂಕರಗೌಡ ಡಿಕ್ಕಿ ಹೊಡಿಸಿ ತದನಂತರ ಕಲ್ಲಿನಿಂದ ಹೊಡೆದು ಹತ್ಯೆಗೈದು ಪರಾರಿಯಾಗಿದ್ದರು. ತನಿಖೆ ನಡೆಸಿ ನಾಲ್ವರು ಆರೋಪಿಗಳು ಶಂಕರಗೌಡ ಬಿರಾದಾರ, ಅಪ್ಪಾಸಾಹೇಬ್ ಬಿರಾದಾರ, ಸಂಗಣ್ಣ ಬಿರಾದಾರ, ಮಂಜುನಾಥ ಬಿರಾದಾರನ್ನು ಬಂಧಿಸಲಾಗಿದೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.