ವಿಜಯಪುರ: ಸ್ನೇಹಿತರಲ್ಲಿ ಹಣಕ್ಕಾಗಿ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಎಸ್ಪಿ ಎಚ್ ಡಿ ಆನಂದಕುಮಾರ ಮಾಹಿತಿ ನೀಡಿದರು. ನಗರದಲ್ಲಿ ಮಾತನಾಡಿದ ಅವರು, ಆರೋಪಿ ಜಾವೇದ ಹಾಗೂ ಕೊಲೆಯಾಗಿರುವ ವೀರೇಶ ಇಬ್ಬರು ಸ್ನೇಹಿತರು. ಅಲ್ಲದೇ, ಇಬ್ಬರು ಸಣ್ಣಪುಟ್ಟ ಕಳ್ಳತನಗೈದು ಜೈಲಿಗೆ ಹೋಗಿ ಬಂದಿದ್ದಾರೆ. ಆದ್ರೇ, ಸಣ್ಣ ಹಣಕ್ಕಾಗಿ ಇಬ್ಬರ ಮಧ್ಯೆ ಜಗಳವಾಗಿ ಕೊಲೆಯಾಗಿದೆ. ಆರೋಪಿ ಜಾವೇದನ್ನು ಗೋಳಗುಮ್ಮಟ್ ಪೊಲೀಸರು ವಶಕ್ಕೆ ಪಡೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದರು.
ಅಲ್ಲದೇ, ಇದಕ್ಕೆ ಪ್ರತಿಕ್ರಿಯೆ ನೀಡಿದ ಹತ್ಯೆಯಾಗಿರುವ ವೀರೇಶನ ಸಹೋದರ ಧರ್ಮರಾಜ್, 300 ರೂಪಾಯಿಗೆ ನನ್ನ ಸಹೋದರನ ಹತ್ಯೆ ಆಗಿಲ್ಲ. ಇದರ ಹಿಂದೇ ಬೇರೆನೆ ಕೈವಾಡ ಇದೆ ಎಂದು ಆರೋಪಿಸಿದರು. ಸಣ್ಣ ಹಣಕ್ಕಾಗಿ ಕೊಲೆ ಆಗಿದ್ದು ಸುಳ್ಳು. ಇದರ ಹಿಂದೆ ಬೇರೆ ಯಾವುದೇ ಕಾರಣ ಇದೆ.
ಅಲ್ಲದೇ, ಹತ್ಯೆಯಾಗಿರುವ ವೀರೇಶ ಹಾಗೂ ಕೊಲೆಗೈದಿರುವ ಆರೋಪಿ ಜಾವೇದ ಸ್ನೇಹಿತರಾಗಿದ್ದರು. ಅದಕ್ಕಾಗಿ ಪೊಲೀಸರು ಸೂಕ್ತ ತನಿಖೆ ನಡೆಸಿ ನಮ್ಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.