ವಿಜಯಪುರ: ಕಾಡು ಬಿಟ್ಟು ನಾಡಿಗೆ ಮುಳ್ಳು ಹಂದಿ ಬಂದಿರುವ ಘಟನೆ ಐತಿಹಾಸಿಕನಗರಿಯಲ್ಲಿ ನಡೆದಿದೆ. ವಿಜಯಪುರ ನಗರದ ಸಿಕ್ಯಾಬ್ ಕಾಲೇಜು ಹತ್ತಿರದ ರಸ್ತೆಯಲ್ಲಿ ಮುಳ್ಳು ಹಂದಿಯೊಂದು ಓಡಾಡುತ್ತಿದೆ. ಇದು ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೇ, ಮುಳ್ಳು ಹಂದಿಯ ವಿಡಿಯೋಯನ್ನು ಯುವಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.