ವಿಜಯಪುರ: ಭೀಮಾತೀರದ ಭೈರಗೊಂಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾದೇವ ಭೈರಗೊಂಡ ಊರ್ಫ್ ಸಾಹುಕಾರ್ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸಿದ್ಧೇಶ್ವರ ಶ್ರೀಗಳ ಚಿತಾ ಭಸ್ಮ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ದರ್ಶನ ಪಡೆದುಕೊಂಡರು. ವಿಜಯಪುರ ನಗರದ ಜ್ಞಾನಯೋಗಾಶ್ರಮಕ್ಕೆ ಸಾಹುಕಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಆಗಮಿಸಿ ಶ್ರೀಗಳ ದರ್ಶನ ಮಾಡಿದರು. ಈ ವೇಳೆ ವಿದ್ಯಾರ್ಥಿನಿ ಮನಿಷಾ ಮಾತನಾಡಿ, ಶ್ರೀಗಳ ಭೈರಗೊಂಡ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ನಮಗೆ ಆಶೀರ್ವಾದ ಮಾಡಿದರು. ಅವರು ಅಗಲಿಕೆಯಿಂದ ನಮಗೆ ನೋವಾಗಿದೆ. ಆದ್ರೂ, ಶ್ರೀಗಳು ನಮ್ಮೊಂದಿಗೆ ಇದ್ದಾರೆ ಎಂದರು.