ವಿಜಯಪುರ: ಬೈಕ್ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿರುವ ಪರಿಣಾಮ ಓರ್ವ ಮಹಿಳೆ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮುಳವಾಡ ಕ್ರಾಸ್ ಬಳಿ ನಡೆದಿದೆ. ಮಹಾದೇವಿ ಕಾರಜೋಳ ಮೃತಪಟ್ಟಿರುವ ದುರ್ದೈವಿ. ಇನ್ನು ಸಾಬು ಕಾರಜೋಳ, ಗಿರಿಜಾಬಾಯಿ ಕತ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಸುಮಾರು 4 ಕಿಲೋಮೀಟರ್ ವರೆಗೂ ಕಾರಿನ ಅಡಿಯಲ್ಲಿ ಮಹಿಳೆಯನ್ನು ಸಿಲುಕಿದ ಹಿನ್ನೆಲೆ ಕಾರಿನ ಸಮೇತ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದಾನೆ. ಚಾಲಕ ಮಹಾಂತೇಶ ಕಾಗವಾಡ ವಿರುದ್ಧ ಕೇಸ್ ದಾಖಲಾಗಿದೆ. ಈ ಕುರಿತು ಮನಗೂಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.