ವಿಜಯಪುರ: ಕಾರು ಹಾಗೂ ಗೂಡ್ಸ್ ವಾಹನ ಮಧ್ಯೆ ಡಿಕ್ಕಿಯಾಗಿರುವ ಪರಿಣಾಮ ಓರ್ವ ಮಹಿಳೆ ಮೃತಪಟ್ಟು,ಎಂಟು ಜನರು ಗಾಯಗೊಂಡಿರುವ ಘಟನೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ನಡೆದಿದೆ. ಗೆದ್ದಲಮರಿ ತಾಂಡಾ ನಿವಾಸಿ ಲಲಿತಾ ಪ್ರಕಾಶ ನಾಯಕ (39) ಮೃತಪಟ್ಟವರು.
ಅಕ್ಷತಾ ಲಮಾಣಿ, ಸ್ಮಿತಾ ಚವ್ಹಾಣ, ಸ್ನೇಹಾ ಲಮಾಣಿ, ನಾಯಕ, ಲತಾ ಲಮಾಣಿ, ಸವಿತಾ ನೀಲಾಬಾಯಿ ರಾಠೋಡ, ಕಮಲಾಬಾಯಿ ಲಮಾಣಿ, ಗೆದ್ದಲಮರಿಯ ಸಂಗಯ್ಯ ಸಂಕಿನ್ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ವಿಜಯಪುರ, ಬಾಗಲಕೋಟೆ ಜಿಲ್ಲಾಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇವರೆಲ್ಲರೂ ಮುದ್ದೇಬಿಹಾಳದಲ್ಲಿ ಸಂಘಟನೆಯೊಂದು ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ನೋಡಿ ತಮ್ಮೂರಿಗೆ ಮರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಎರಡೂ ವಾಹನಗಳು ನಜ್ಜುಗುಜ್ಜಾಗಿವೆ. ಕಾರು ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.