ವಿಜಯಪುರ: ತರಕಾರಿ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ಟೊಮೆಟೊ ಬೆಲೆಯಂತು ಈಗಾಗಲೇ 150ರ ಗಡಿದಾಟಿದೆ. ಈ ಬೆಲೆ ಏರಿಕೆಯಿಂದ ಮಧ್ಯಮ ವರ್ಗ ತತ್ತರಿಸಿಹೋಗಿದ್ದರೆ ವಿಜಯಪುರದಲ್ಲೊಬ್ಬ ರೈತ(Farmer) ಬರೊಬ್ಬರಿ ಅರ್ಧಕೋಟಿ ಸಂಪಾದನೆ ಮಾಡಿದ್ದು, 1 ಕೋಟಿ ರೂ. ಆದಾಯ((Crore) ಗಳಿಸುವ ನಿರೀಕ್ಷೆಯಲ್ಲಿದ್ದಾನೆ. ಟೊಮೇಟೊಗೆ(Tomato) ಈ ಹಿಂದೆ ಅಷ್ಟೊಂದು ಬೆಲೆ ಇರಲಿಲ್ಲ, ಪರ್ಯಾಯವಾಗಿ ಒಂದಿಷ್ಟು ದಿನದ ಖರ್ಚಿಗೆ ಆಗುತ್ತದೆ ಎಂದು ಅನೇಕ ರೈತರು ಬೆಳೆಯುತ್ತಿದ್ದರು ಹೊರತು ಪೂರ್ಣ ಪ್ರಮಾಣದ ಬೆಳೆ ಕಡಿಮೆ. ಆದರೆ ಈಗ ಈ ಬೆಳೆಗೆ ರಾಜಯೋಗ ಬಂದಿದ್ದು, ಬೆಳೆದ ರೈತರಿಗೂ ಸಹ ರಾಜಯೋಗ ಬಂದಿದೆ. ವಿಜಯಪುರ ತಾಲೂಕಿನ ಅಲಿಯಾಬಾದ ಎಲ್.ಟಿಯ ರೈತ ಬಿ.ಬಿ.ಲಮಾಣಿ ನಾಲ್ಕು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆ ಬೆಳೆದು ಅರ್ಧ ಕೋಟಿ ಒಡೆಯನಾಗಿದ್ದಾನೆ. ಟೊಮೆಟೊ ಬೆಳೆದ ರೈತನಿಗೆ ಬಂಪರ್ ಬೆಲೆ(Money) ದೊರಕಿದೆ. ಮಾರ್ಚ ತಿಂಗಳ ಮೊದಲ ವಾರದಲ್ಲಿ ಟೊಮೆಟೊ ಸಸಿ ನಾಟಿ ಮಾಡಿ ವೈಜ್ಞಾನಿಕವಾಗಿ ಕೃಷಿ ಮಾಡಿದ್ದಾರೆ. ಮೊದಲು ರೈತ ಕೂಲಿಯಾಳುಗಳ ಖರ್ಚು, ಮನೆ ಖರ್ಚಿಗೆಂದು ಟೊಮೆಟೊ ಹಾಕಿದ್ದರು. ಆದರೆ ರೈತನಿಗೆ ಬಂಪರ್ ಬೆಲೆಯಿಂದ ಅದೃಷ್ಟ ಖುಲಾಯಿಸಿದೆ. ಒಂದುವರೆ ತಿಂಗಳಲ್ಲಿ ಅರ್ಧಕೋಟಿ ಗಳಿಸಿದ್ದಾರೆ.
ಬಿ ಬಿ ಲಮಾಣಿ ನಿವೃತ್ತ ಸಹಾಯಕ ಕೃಷಿ ಅಧಿಕಾರಿಯಾಗಿದ್ದುರು ನಿವೃತ್ತಿ ಬಳಿಕ ಒಟ್ಟು 14ಎಕರೆ ಜಮೀನಿನಲ್ಲಿ ಬೇರೆ ಬೇರೆ ತರಕಾರಿ ಬೆಳೆಯಲು ಪ್ಲಾನ್ ಹಾಕಿಕೊಂಡು. ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಹಾಗೂ ತಾವೆ ಬೆಳೆದ ಟೊಮೆಟೊ ವಿಜಯಪುರ ಮಾರುಕಟ್ಟೆಗೆ ಸಾಗಿಸುತ್ತಾರೆ. ಏಕಾಏಕಿ ಒಂದು ರೀತಿ ಷೇರು ಮಾರುಕಟ್ಟೆಯ ರೀತಿ ಟೊಮೆಟೊ ಬೆಲೆ ಏರಿಕೆಯಾಗಿದ್ದು, ಟಮಾಟಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು.. ಹೀಗಾಗಿ ಕಳ್ಳರು ಅಮೂಲ್ಯ ವಸ್ತುಗಳ ಬದಲಿಗೆ ಟಮಾಟಿ ಮೇಲೆ ಕಣ್ಣು ಹಾಕಿದ್ದಾರೆ. ಟಮಾಟಿ ಬೆಳೆದ ಜಮೀನುಗಳಿಗೆ ನುಗ್ಗಿ ಕಳ್ಳತನ ಮಾಡುವ ಕೃತ್ಯಕ್ಕೂ ಮುಂದಾಗಿದ್ದಾರೆ. ಟೊಮೆಟೊಗೆ ಬಂಪರ್ ಬೆಲೆ ಹಿನ್ನೆಲೆಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಕಳ್ಳರು ಟೊಮೆಟೊ ಕದ್ದು, ಬಿಬಿ ಲಮಾಣಿ ಸಹೋದರನಿಗೆ ಹಲ್ಲೆ ಮಾಡಿ ಸಿಸಿಟಿವಿ ಅಳವಡಿಸಿದ್ದನ್ನು ಕಿತ್ತುಕೊಂಡು ಹೋಗಿದ್ದಾರೆ. ಟೊಮೆಟೊ ಬೆಳೆಗೆ ರಕ್ಷಣೆ ಕೊಡಿ ಎಂದು ವಿಜಯಪುರ ಎಸ್ಪಿಗೂ ಮನವಿ ಮಾಡಿರುವ ರೈತ ಸದ್ಯ ಪ್ರತಿ ಟೊಮೆಟೊ ಬಾಕ್ಸ್ ಗೆ 2500 ರಿಂದ 2900 ಬೆಲೆಯಿದೆ, ನಿತ್ಯ 60-80 ಬಾಕ್ಸ್ ನಿತ್ಯ ಮಾರುಕಟ್ಟೆಗೆ ಕಳುಹಿಸುತ್ತಾರೆ. ನಿತ್ಯ 1.50 ಲಕ್ಷ ದಿಂದ 2 ಲಕ್ಷ ಆದಾಯ ಬರುತ್ತಿದೆ. ಇನ್ನು ಎರಡು ತಿಂಗಳು ಟೊಮೆಟೊ ಬೆಳೆ ಬರುವುದರಿಂದ 1 ಕೋಟಿಯವರೆಗೆ ಆದಾಯ ನಿರೀಕ್ಷೆಯಿದೆ ಎನ್ನುತ್ತಾರೆ ಬಿ.ಬಿ.ಲಮಾಣಿ. 50 ರಿಂದ 60 ಕೂಲಿಯಾಳುಗಳಿಂದ ಟೊಮೆಟೊ ಹಣ್ಣು ಕಟಾವು ಮಾಡುತ್ತಿದ್ದಾರೆ. ದ್ರಾಕ್ಷಿ ಬೆಳೆಯಿಂದ ನಷ್ಟ ಅನುಭವಿಸಿದ್ದೇವೆ. ಇದೇ ಮೊದಲ ಬಾರಿಗೆ ಟೊಮೆಟೊ ಬೆಳೆದಿದ್ದಾರೆ. ಪತ್ನಿ ಕಮಲಾ ಕೃಷಿಯಲ್ಲಿ ಸಾಥ್ ನೀಡಿದ್ದಾರೆ. ನಿತ್ಯ ಆಳುಗಳೊಂದಿಗೆ ಟೊಮೆಟೊ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.