ಧಾರವಾಡ: ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಬಸಪ್ಪ ದ್ಯಾಮಣ್ಣ ಬುದಿಹಾಳ ಎಂಬುವರ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಸುಟ್ಟು ಹಾನಿಯಾಗಿದೆ. ಈ ವಿಷಯ ತಿಳಿಯುತ್ತಿದಂತೆ ಕುಂದಗೋಳ ಮತಕ್ಷೇತ್ರದ ಶಾಸಕರಾದ ಕುಸುಮಾವತಿ ಶಿವಳ್ಳಿ ಸ್ಥಳಕ್ಕೆ ಭೇಟಿ ನೀಡಿ ತಹಶಿಲ್ದಾರ ಪರಮಾನಂದ ಅವರಿಗೆ ಸೂಕ್ತ ಪರಿಹಾರ ದೊರಕಿಸುವಂತೆ ಹೇಳಿದರು. ನಂತರ ಕುಟುಂಬಸ್ಥರಿಗೆ ಧೈರ್ಯವನ್ನು ಹೇಳಿ ಆಹಾರ ಸಾಮಾಗ್ರಿ ಬಟ್ಟೆ ಆರ್ಥಿಕ ಸಹಾಯವನ್ನು ಮಾಡಿದರು.
ಈ ಸಂದರ್ಭದಲ್ಲಿ ಮುತ್ತಣ್ಣ ಶಿವಳ್ಳಿ, ಮಲ್ಲೇಶ ದಲ್ಲಣ್ಣವರ,ಕಲ್ಲಪ್ಪ ಹರಕುಣಿ,ಅಲ್ತಾಪ್ ತಲವಾಯಿ, ಗ್ರಾಮಲೆಕ್ಕಾಧಿಕಾರಿ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಆಕಸ್ಮಿಕ ಬೆಂಕಿ ಅವಘಡ, ಅಪಾರ ಹಾನಿ
![](https://karnataka1news.com/wp-content/uploads/2023/03/IMG-20230301-WA0052.jpg)