ವಿಜಯಪುರ: ಆಕಸ್ಮಿಕವಾಗಿ ಓಮನಿ ಕಾರ್ನಲ್ಲಿ ಬೆಂಕಿ ಕಾಣಿಸಿಕೊಂಡು ಓಮನಿ ಕಾರ್ ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮುದ್ದೇಬಿಹಾಳ ಆಲಮಟ್ಟಿ ರಸ್ತೆಯಲ್ಲಿ ರವಿವಾರ ನಡೆದಿದೆ.
ಅನಿಲ್ ಗೋಪಾಲ ಚವ್ಹಾಣ ಎಂಬುವರ ಕಾರ್ ಭಸ್ಮವಾಗಿದೆ. ಇನ್ನು ಓಮನಿ ಕಾರ್ ನಲ್ಲಿ ಬಟ್ಟೆ ಮಾರಾಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕಾರ್ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರ್ ಬೆಂಕಿಗಾಹುತಿ ಆಗಿದೆ. ಚಾಲಕ ಜಸ್ಟ್ ಪರಾರಿಯಾಗಿದ್ದಾನೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.