ವಿಜಯಪುರ: ಭೀಮಾತೀರದಲ್ಲಿ ನಕಲಿ ಎನ್ಕೌಂಟರ್, ಮರ್ಡರ್ ಪ್ರಕರಣದಲ್ಲಿ ವಿಜಯಪುರ
ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯಕ್ಕೆ ರೌಡಿಶೀಟರ್ ಮಹಾದೇವ ಬೈರಗೊಂಡ ಹಾಗೂ ಗ್ಯಾಂಗ್ ಹಾಜರಾದರು.
ಭೀಮಾತೀರ ಖ್ಯಾತಿಯ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಕೊಂಕಣಗಾಂವನಲ್ಲಿ ನಡೆದಿದ್ದ ಹಂತಕ ಧರ್ಮರಾಜ್ ಚಡಚಣ ನಕಲಿ ಎನ್ಕೌಂಟರ್ ಹಾಗೂ ಸಹೋದರ ಗಂಗಾಧರ ಚಡಚಡ ಬರ್ಬರ ಹತ್ಯೆ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಮಹಾದೇವ ಬೈರಗೊಂಡ ಹಾಗೂ ಆರೋಪಿಗಳು ಹಾಜರಾದರು. ಪ್ರಕರಣದಲ್ಲಿ ಒಟ್ಟು 18 ಆರೋಪಿಗಳಿದ್ದಾರೆ. ಓರ್ವ ಆರೋಪಿ ಮಹಾದೇವ ಬೈರಗೊಂಡನ ಮೇಲೆ ನಡೆದಿದ್ದ ಅಟ್ಯಾಕ್ನಲ್ಲಿ ಅಸುನೀಗಿದ. ಇದೀಗ್ 15 ಆರೋಪಿಗಳು ಕೋರ್ಟ್ಗೆ ಹಾಜರಾಗಿದ್ದು , ಇಬ್ಬರು ಆರೋಪಿಗಳು ಕೋರ್ಟಗೆ ಗೈರಾಗಿದ್ದಾರೆ. ಅಂದಿನ ಚಡಚಣ ಸಿಪಿಐ ಆಗಿದ್ದ ಮಲ್ಲಿಕಾರ್ಜುನ್ ಅಸೋಡೆ ಸೇರಿದಂತೆ ಆರೋಪಿಗಳು ಹಾಜರಾದರು.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)