ವಿಜಯಪುರ: ಬ್ಯಾಂಕ್ಗೆ ಹೋದಾಗ ಮಹಿಳೆಯ ಚಿನ್ನ, ನಗದು ಇರುವ ಬ್ಯಾಗ್ ಕಳ್ಳತನಗೈದಿರುವ ಆರೋಪಿಗಳನ್ನು ಎರಡು ಗಂಟೆಯಲ್ಲಿ ಬಂಧನ ಮಾಡಿರುವ ಘಟನೆ ವಿಜಯಪುರ ನಗರದಲ್ಲಿ ಶುಕ್ರವಾರ ನಡೆದಿದೆ. ಜಯಶ್ರೀ ಸಜ್ಜನ ಎನ್ನುವರ ಬ್ಯಾಗ್ನ್ನು ಕಳ್ಳರು ಕಳ್ಳತನಗೈದು ಎಸ್ಕೇಪ್ ಆಗಿದ್ದರು. ತಕ್ಷಣವೇ ಪೊಲೀಸರಿಗೆ ಜಯಶ್ರೀ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿದ ಆದರ್ಶನಗರ ಠಾಣಾ ಪಿಎಸ್ಐ ದುಂಡಸಿ ಆ್ಯಂಡ್ ಟೀಂ ಕೇವಲ ಎರಡು ಗಂಟೆಯಲ್ಲಿ ಆರೋಪಿ ಸಮೇತ ಬ್ಯಾಗ್ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಬ್ಯಾಗ್ನಲ್ಲಿದ ನಗದು, ಚಿನ್ನವನ್ನು ಜಯಶ್ರೀ ಅವರಿಗೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ. ಆದರ್ಶನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/06/IMG_20230630_205752-1024x564.jpg)