ವಿಜಯಪುರ: ಅಕ್ರಮವಾಗಿ ಗನ್ ಇಟ್ಟುಕೊಂಡು ಏನೋ ಪ್ಲಾನ್ ಮಾಡಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಒಂದು ಕಂಟ್ರಿ ಪಿಸ್ತೂಲ್ ಹಾಗೂ ಒಂದು ಜೀವಂತ ಗುಂಡು ಜಪ್ತಿಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ಕುಮಟಗಿ ತಾಂಡಾದಲ್ಲಿ ನಡೆದಿದೆ.
ನರಸಿಂಗ್ ಹಣಮಂತ ಪವಾರ್, ಸತೀಶ ರಾಮು ರಾಠೋಡ, ರಾಜು ಕೇಸು ರಾಠೋಡ, ಪ್ರಕಾಶ ಶಂಕರ ರಾಠೋಡ ಬಂಧಿತ ಆರೋಪಿಗಳು. ಇನ್ನು ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿರುವ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು 50 ಸಾವಿರ ಮೌಲ್ಯದ ಒಂದು ಕಂಟ್ರಿ ಪಿಸ್ತೂಲ್, 500 ರೂಪಾಯಿ ಮೌಲ್ಯದ ಒಂದು ಜೀವಂತ ಗುಂಡು, 3.5 ಲಕ್ಷ ಮೌಲ್ಯದ ಒಂದು ಕಾರ್, ಒಂದು ಜೀಪ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್ಪಿ ಆನಂದಕುಮಾರ ಮಾಹಿತಿ ನೀಡಿದರು.
ಮತ್ತೊಂದು ಪ್ರಕರಣದಲ್ಲಿ ಪ್ರತಿಷ್ಠಿತ ಬಟ್ಟೆ ಕಂಪನಿಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನಗೈದಿದ್ದ ಅಂತರ್ ರಾಜ್ಯ ಕಳ್ಳರ ಬಂಧನ ಮಾಡಿದ್ದಾರೆ. ಸಲೀಂ ಖುರೇಷಿ, ಅಸ್ಲಾಂ ಶೇಖ್, ಮನೀಷಕುಮಾರ ಸಿಂಗ್, ಮಹಮ್ಮದ್ಉಮರ್ ಶೇಖ್, ಅಬ್ದುಲ್ರಹೀಮ್ ಮೋಮಿನ್, ಪಿಂಟುಕುಮಾರ ವರ್ಮಾ, ರಾಕೇಶ ಬೆನವಂಶಿ, ಕಲಮೇಶ ಮಿಶ್ರಾ, ಪ್ರದೀಪ್ ಶರ್ಮಾ ಬಂಧಿತರು. ಇನ್ನು ಬಂಧಿತರು ನಗರದ ಕೆಐಎಡಿಬಿ ಹತ್ತಿರದ ಪ್ರತಿಷ್ಠಿತ ಇಟ್ಕೋ ಡೆನಿಮ್ ಟೈಕ್ಸ್ಟೈಲ್ ಫ್ಯಾಕ್ಟರಿಯಲ್ಲಿ 70 ಲಕ್ಷ ಮೌಲ್ಯದ 1500 ಕಾರ್ಡ್, 158 ಡಿಸ್ಪ್ಲೇ, 250 ಪ್ರಿವೈಂಡರ್, 150 ಬ್ಲ್ಯಾಕ್ ಬಾಕ್ಸ್ ಕಳ್ಳತನ ಮಾಡಿದ್ದು, ಇದನ್ನು ಸಿಇಓ ಪೊಲೀಸರು ಚಾಣಾಕ್ಷದಿಂದ ಆರೋಪಿಗಳನ್ನು ಬಂಧಿಸಿ, ವಸ್ತುಗಳು ಜಪ್ತಿಗೈದಿದ್ದಾರೆ. ಈ ಕುರಿತು ವಿಜಯಪುರ ಸಿಇಓ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ನಗರಾದ್ಯಂತ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಬೈಕ್ಗಳನ್ನು ಜಪ್ತಿಗೈದಿರುವ ಘಟನೆ ವಿಜಯಪುರ ನಗರದ ಸೊಲ್ಲಾಪುರ ಬೈಪಾಸ್ ಬಳಿ ನಡೆದಿದೆ. ಮನೋಜ್ ತುಕಾರಾಂ ರಾಠೋಡ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವನ್ನು ಬಂಧಿಸಲಾಗಿದೆ. ಅಲ್ಲದೇ, ಬಂಧಿತರಿಂದ 4.5 ಲಕ್ಷ ಮೌಲ್ಯದ 6 ಬೈಕ್ಗಳನ್ನು ಜಪ್ತಿಗೈದಿದ್ದಾರೆ. ಅಲ್ಲದೇ, ಆದರ್ಶನಗರ ಪೊಲೀಸ ಠಾಣೆ 5 ಹಾಗೂ ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಒಂದು ಬೈಕ್ ಕಳ್ಳತನ ಮಾಡಿದ್ದಾರೆ. ಇನ್ನು ಈ ಕುರಿತು ಗಾಂಧಿಚೌಕ್, ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ K1Nಗೆ ಮಾಹಿತಿ ನೀಡಿದರು. ಅಲ್ಲದೇ, ತನಿಖಾ ತಂಡಕ್ಕೆ ಬಹುಮಾನವನ್ನು ಎಸ್ಪಿ ಎಚ್ಡಿಎ ಘೋಷಣೆ ಮಾಡಿದ್ದಾರೆ.