ವಿಜಯಪುರ: ನಗರಾದ್ಯಂತ ಮನೆಗಳ್ಳತನ ಹಾಗೂ ವಾಹನಗಳ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸಿಕಂದರ್ ಸೈಯದ್, ಅಗಅಮೀನಖಾನ್ ಪಠಾಣ್, ಅಬ್ದುಲ್ರಹೀಮ್ ಶೇಖ್ ಬಂಧಿತ ಆರೋಪಿಗಳು. ಇನ್ನು ನಗರಾದ್ಯಂತ ವಿವಿಧ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ 5 ಮನೆಗಳ್ಳತನ, 3 ವಾಹನಗಳನ್ನು ಕಳ್ಳತನಗೈದಿದ್ದರು. ಈ ಕುರಿತು ಆದರ್ಶನಗರ ಹಾಗೂ ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೇ, ಕೊಲೆಗೈದು ಪರಾರಿಯಾಗಿದ್ದ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ. ವಿಜಯಪುರದ ಭೂತನಾಳನಲ್ಲಿ ಸಂತೋಷ ಸದಾಶಿವ ಕಾಳೆನ್ನು ಬರ್ಬರವಾಗಿ ಹತ್ಯೆಗೈದು ಮೂವರು ಪರಾರಿಯಾಗಿದ್ದರು. ಅದಕ್ಕಾಗಿ ವಿಠ್ಠಲ ಕಾಳೆ, ಅರ್ಜುನ ಕಾಳೆ, ಧೂಳಪ್ಪ ಕಾಳೆ ಎಂಬಾತರನ್ನು ಬಂಧನ ಮಾಡಲಾಗಿದೆ. ಇನ್ನೂ ಆದರ್ಶನಗರ ಪಿಎಸ್ಐ ಯತೀಶ ಕೆಎನ್ ನೇತೃತ್ವದ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ಇವರ ಮೇಲೆ 323, 324, 302, 504 ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಈ ಕುರಿತು ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.