ವಿಜಯಪುರ: ಕುಡಿದ ಮತ್ತಿನಲ್ಲಿ ಗಂಡನೋರ್ವ ಹೆಂಡತಿಯನ್ನು ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಲೋಣಿ ಬಿ ಕೆ ಗ್ರಾಮದಲ್ಲಿ ನಡೆದಿದೆ. ಜೇಟ್ಟೆಪ್ಪ ಮಲ್ಲಾಡೆ ಹತ್ಯೆಗೈದಿರುವ ಪಾಪಿ ಪತಿ. ಲಕ್ಷ್ಮಿ ಜೇಟ್ಟೆಪ್ಪ ಮಲ್ಲಾಡೆ (26) ಕೊಲೆಯಾಗಿರುವ ದುರ್ದೈವಿ. ಕೊಲೆಗೆ ಕೌಟುಂಬಿಕ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.