ವಿಜಯಪುರ: ಹಣಕಾಸಿನ ವಿಚಾರಕ್ಕೆ ಜಗಳವಾಗಿ ವ್ಯಕ್ತಿಯ ಕೊಲೆ ಮಾಡಿದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ.ದಂಡ ವಿಧಿಸಿ ವಿಜಯಪುರ ಜಿಲ್ಲಾ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ.
ಗಾಂಧಿನಗರದ ನಿವಾಸಿ ಮಕ್ಬುಲ್ ರಸೂಲಸಾಬ ಶೇಖ ಶಿಕ್ಷೆಗೆ ಗುರಿಯಾಗಿದ್ದಾನೆ.
ಮಕ್ಬುಲ್ ತನ್ನ ಪತ್ನಿಯ ಅಣ್ಣ ಗೌಸಮೊಹಿದ್ದೀನ ನಬಿಲಾಲ ಹೊನವಾಡಗೆ ಮೂರು ತಿಂಗಳ ಹಿಂದೆ ಅಡಚಣೆಗಾಗಿ 70 ಸಾವಿರ ಹಣ ಪಡೆದುಕೊಂಡಿದ್ದನು. ಮರಳಿ ಹಣ ನೀಡುವಂತೆ ಮಕ್ಬುಲ್ ಹಾಗೂ ಆತನ ಪತ್ನಿ ಒತ್ತಾಯಿಸಿದ್ದರು. ಆದರೆ, ಹಣ ನೀಡದಕ್ಕೆ ಮಕ್ಬುಲ್ ಪರಸಿಗಲ್ಲಿನಿಂದ ಗೌಸಮೊಹಿದ್ದೀನ ತಲೆಗೆ ಹೊಡೆದು ಕೊಲೆ ಮಾಡಿದ್ದನು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಮದ್ವೇಶ ದಬೇರ ಅವರು, ಮಕ್ಬುಲ್ಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿ.ಜಿ. ಮಾಮನಿ ವಾದ ಮಂಡಿಸಿದ್ದರು.