ವಿಜಯಪುರ: ಹಣಕ್ಕಾಗಿ ಕಳ್ಳ, ಪೊಲೀಸ ಒಂದಾಗಿ ಜೆಸ್ಕಾಂ ಅಧಿಕಾರಿ ಹತ್ಯೆಗೈದಿರುವ ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಎಸ್ಪಿ ಎಚ್.ಡಿ. ಆನಂದಕುಮಾರ ಮಾಹಿತಿ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಹಣಕ್ಕಾಗಿ ರಾಜಶೇಖರ ಚೆಡ್ಡಿನ್ನು ಏಳು ಜನರು ಕಿಡ್ನ್ಯಾಪ್ ಮಾಡಿ ಐವತ್ತು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಕ್ಕೆ ತಲೆಗೆ ಮೊಳೆ ಹೊಡೆದು ಕೊಲೆ ಮಾಡಿದರು. ಇನ್ನು ಜೇವರ್ಗಿ ಜೆಸ್ಕಾಂ ಇಲಾಖೆಯ ಅಧಿಕಾರಿ ಹತ್ಯೆಗೈದಿದ್ದ ಯಶವಂತ ಮೇಲಕೇರಿ, ಶ್ರೀಶೈಲ ಜಮಾದಾರ, ಶಿವಕುಮಾರ ಗುತ್ತೇದಾರ, ಸುಧಾಕರ ಮದಗುಣಕಿ, ಬಾಬುರಾವ ಸಮಗಾರ, ಭೀಮಾಶಂಕರ ಪಾಟೀಲ್, ಶಿವಾನಂದ ಕಮ್ಮಾನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.