ವಿಜಯಪುರ: ಕೊಲೆ ಮಾಡಿದ ಆರೋಪಿಗೆ ವಿಜಯಪುರದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಮಧ್ಯಪ್ರದೇಶದ ಇಂದೋರ್ನ ಪತ್ತೆಸಿಂಗ್ ರಜಪೂತ ಶಿಕ್ಷೆಗೊಳಗಾದ ಆರೋಪಿ. ಈತನೊಂದಿಗೆ ಇದೇ ಕಂಪನಿಯ ದಿನೇಶ ಪರ್ವತ ಎಂಬ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ ಈತ ತನ್ನ ಮಾಲೀಕನಿಗೆ ತನ್ನ ವಿರುದ್ಧ ದೂರು ಹೇಳುತ್ತಿದ್ದಾನೆ ಎಂದು ಶಂಕಿಸಿ ಕಬ್ಬಿಣದ ರಾಡ್ನಿಂದ 2018ರ ಜುಲೈ 5ರಂದು ವಿಜಯಪುರದ ತಿಡಗುಂದಿ ಬಳಿ ಕೊಲೆ ಮಾಡಿದ್ದ ಎಂದು ಪ್ರಕರಣ ದಾಖಲಿಸಿಕೊಂಡು ವಿಜಯಪುರ ಗ್ರಾಮೀಣ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಮದ್ವೇಶ ದಬೇರ ಅವರು, ಪುರಾವೆ ಪರಿಶೀಲಿಸಿ, 50 ಸಾವಿರ ದಂಡ ವಿಧಿಸಿ ಈ ಶಿಕ್ಷೆ ವಿಧಿಸಿದ್ದಾರೆ. ದಂಡದ ಹಣದಲ್ಲಿ 40 ಸಾವಿರ ರೂ. ಗಳನ್ನು ಕೊಲೆಗೀಡಾದ ದಿನೇಶ ಪುತ್ರನಿಗೆ ಪರಿಹಾರ ನೀಡಬೇಕು ಹಾಗೂ 10 ಸಾವಿರ ರೂ. ಗಳನ್ನು ಸರಕಾರಕ್ಕೆ ಭರಿಸಬೇಕೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ವಿ.ಜಿ. ಮಾಮನಿ ವಾದ ಮಂಡಿಸಿದ್ದರು.