ವಿಜಯಪುರ: ಸ್ವಚ್ಚತೆ ಹಾಗೂ ಕಾನೂನಿನ ಅರಿವು ಮೂಡಿಸುತ್ತಿರುವ ಪಿಎಸ್ಐ ಯತೀಶ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಪತ್ರಕರ್ತರು ಮಂಗಳವಾರ ಸನ್ಮಾನಿಸಿ ಗೌರವಿಸಿದರು. ವಿಜಯಪುರ ನಗರದ ಆದರ್ಶನಗರ ಪೊಲೀಸ ಠಾಣೆಯಲ್ಲಿ ಪಿಎಸ್ಐ ಯತೀಶ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಅಲ್ಲದೇ, ಆದರ್ಶನಗರ ಪೊಲೀಸ ಠಾಣೆಯ ಸುತ್ತಮುತ್ತಲಿನ ಸೇರಿದಂತೆ ಠಾಣಾ ಆವರಣದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿದ್ದಾರೆ. ಅಲ್ಲದೇ, ಕ್ರೈಂ ತಡೆಗಟ್ಟಲು ವಿವಿಧ ಚಿತ್ರಗಳನ್ನು ಆವರಣದ ಗೋಡೆಯ ಮೇಲೆ ಬಿಂಬಿಸಿ ಜನತೆಯಲ್ಲಿ ಅಪರಾಧ ತಡೆಗೆ ಕ್ರಮ ಕೈಗೊಂಡಿದ್ದಾರೆ. ಅದಕ್ಕಾಗಿ ಕರವೇ ನೇತೃತ್ವದಲ್ಲಿ ಸನ್ಮಾನಿಸಲಾಗಿದೆ. ತದನಂತರ ಎಸ್ಪಿ ಎಚ್ಡಿ ಆನಂದಕುಮಾರನ್ನು ಸನ್ಮಾನಿಸಿ ಗೌರವಿಸಿದರು.