ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಅಭಿಮಾನಿಗಳಿಬ್ಬರು 2500 ಕಿಮೀ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಶಿರಗುಪ್ಪಿ ಗ್ರಾಮದ ಸಂತೋಷ ಹಿರೇಮಠ ಹಾಗೂ ಬಸಪ್ಪ ಸಂತಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಮಂಗಳವಾರ ವಿಜಯಪುರಕ್ಕೆ ತಲುಪಿದರು. ವೃತ್ತಿಯಿಂದ ಚಾಲಕನಾಗಿರುವ ಸಂತೋಷ ಹಿರೇಮಠ ಹಾಗೂ ರೈತನಾಗಿರುವ ಬಸಪ್ಪ ಸಂತಿ ಈಗಾಗಲೇ ಮೋದಿ ಭೇಟಿಗಾಗಿ ಒಮ್ಮೆ ಪಾದಯಾತ್ರೆ ನಡೆಸಿದ್ದರು. ಆದರೆ, ಅವರ ಭೇಟಿ ಅಸಾಧ್ಯವಾದ ಹಿನ್ನೆಲೆ ಮೋದಿ ಅವರ ತಾಯಿಯನ್ನು ಭೇಟಿ ಮಾಡಿ ವಾಪಸ್ ಆಗಿದ್ದಾರೆ. ಪ್ರತಿ ದಿನ 45-50 ಕಿಮೀ ನಡೆಸಿಕೊಂಡು ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದು ಅಲ್ಲಿಂದ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಂಕಲ್ಪ ಮಾಡಿದ್ದಾರೆ.