ವಿಜಯಪುರ: ವಿಜಯಪುರ ನಗರದಲ್ಲಿ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳ ಮೇಲೆ ಕೃಷಿ ಅಧಿಕಾರಿಗಳು ದಾಳಿಗೈದಿರುವ ಘಟನೆ ನಡೆದಿದೆ.
ಆನಂದ ಅಗ್ರೋ ಸೆಂಟರ್ನಲ್ಲಿ ರೈತರ ಸಹಿ, ಬಿಲ್ ರಸೀದಿ, ದರದಲ್ಲಿ ಮಾರಾಟ ಹಾಗೂ ತಿಕೋಟಾದ ರೇಣುಕಾ ಕೃಷಿ ಸೇವಾ ಕೇಂದ್ರ, ಮುದ್ದೇಬಿಹಾಳದ ಮಲ್ಲಿಕಾರ್ಜುನ ಟ್ರೇರ್ಸ್ನಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿರುವುದರಿಂದ ಲೈಸನ್ಸ್ ಅಮಾನತು ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.