ವಿಜಯಪುರ: ನಗರದ ಬಾಗಲಕೋಟೆಯ ರಸ್ತೆಯಲ್ಲಿ ಮನೆಯಲ್ಲಿಯೇ ಸಣ್ಣದೊಂದು ಚಹಾದ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿರುವ ಕಲಿಲಿಪಾಶ ಇನಾಮದಾರ ಅವರ ಮಗಳು ಮುಬಿಶ್ರೀನ್ ಇನಾಮದಾರ ಎಂಎಸ್ಸಿ ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆದುಕೊಳ್ಳುವುದರ ಮೂಲಕ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂದು ತೋರಿಸಿಕೊಟ್ಟಿದ್ದು ಇತರೇ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಿದ್ದಾಳೆ.
ನನಗೆ ಶಿಕ್ಷಣ ಕೊಡಿಸಲು ನಮ್ಮ ತಂದೆ ಕಷ್ಟಪಟ್ಟಿರುವುದನ್ನು ನೋಡಿ ನಾನು ಹಗಲು ರಾತ್ರಿ ನಿರಂತರ ಅಧ್ಯಯನ ಮಾಡಿ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದೇನೆ. ನಾನು ನಮ್ಮ ತಂದೆಯ ಕಷ್ಟ ದೂರ ಮಾಡಲು ಐಎಎಸ್ ಪಾಸ ಮಾಡುವ ಗುರಿ ಹೊಂದಿದ್ದೇನೆ. ಈ ಚಿನ್ನದ ಪದಕಗಳನ್ನು ತಂದೆಗೆ ಅರ್ಪಿಸುತ್ತೇನೆ ಎಂದು ಮುಬಿಶ್ರೀನ್ ಇನಾಮದಾರ ಭಾವುಕರಾದರು.