ವಿಜಯಪುರ: ಅದೊಂದು ಸಣ್ಣ ಘಟನೆ.. ಆ ಘಟನೆಯನ್ನ ಆಧಾರವಾಗಿಟ್ಟುಕೊಂಡು ಮೂವರು ಅಂಗವಿಕಲರ ಸುತ್ತ ಕಥೆ ಮೂಲಕ ಪರ್ಯಾಯ ಎಂಬ ಅದ್ಭುತ ಸಿನೆಮಾ ಸದ್ಯದರಲ್ಲೇ ಪರ್ಯಾಯ ತೆರೆ ಕಾಣಲಿದೆ. ನಿರ್ದೇಶಕ ರಮಾನಂದ ಮಿತ್ರ ಅವರ ಪರ್ಯಾಯ ಹೆಸರಿನ ಚಲನಚಿತ್ರ ನಿರೂಪಿಸಿದ್ದಾರೆ. ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಕುಂದಾನಗರಿ ಖ್ಯಾತಿಯ ಬೆಳಗಾವಿ ಮೂಲದ ಸ್ನೇಹಿತರೆಲ್ಲ ಸೇರಿ ಪ್ರಚಾರದ ಮೊದಲ ಹಂತವಾಗಿ ಟೀಸರ್ ಹಾಗೂ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿದ್ದಾರೆ. ಮಮತಾ ಕ್ರಿಯೇಶನ್ಸ್ ಮೂಲಕ ರಾಜಕುಮಾರ್ ಹಾಗೂ ಇಂದುಮತಿ ರಾಜ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ರಾಜ್ ಕುಮಾರ್ ಅವರು ಅಂಧನ ಪಾತ್ರದಲ್ಲೂ ಸಹ ಕಾಣಿಸಿಕೊಂಡಿದ್ದಾರೆ.