ವಿಜಯಪುರ: ಸರಿಯಾದ ಸಮಯಕ್ಕೆ ಊಟ ಸಿಗದೆ ಹಾಗೂ ಯಾವುದೋ ಕಾಯಿಲೆಯಿಂದ ಅಪರಿಚಿತ ವ್ಯಕ್ತಿ ಅಸುನೀಗಿರುವ ಘಟನೆ ವಿಜಯಪುರ ನಗರದ ರಾಣಿ ಚೆನ್ನಮ್ಮ ರಂಗಮಂದಿರದ ಬಳಿ ಮಂಗಳವಾರ ನಡೆದಿದೆ. ಸುಮಾರು 40-45 ವಯಸ್ಸಿನ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ದುರ್ದೈವಿ.
ಇನ್ನು ರಂಗಮಂದಿರದ ಬಳಿ ಕಳೆದ ಹಲವು ದಿನಗಳಿಂದ ನೆಲೆಸುತ್ತಿದ್ದರು. ಆದ್ರೇ, ಅನಾರೋಗ್ಯ ನಿಮಿತ್ತ ಮೃತಪಟ್ಟಿದ್ದಾರೆ. ಅದಕ್ಕಾಗಿ ಕುಟುಂಬಸ್ಥರು ಹಾಗೂ ವಾರಸುದಾರರು ಇದ್ರೇ ಠಾಣೆಗೆ ಭೇಟಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.