![](https://karnataka1news.com/wp-content/uploads/2024/01/golgummath.jpg)
ವಿಜಯಪುರ: ಬಸ್ ಏರುವಾಗ ಬ್ಯಾಗ್ನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನವನ್ನು ಕಳ್ಳರು ಕಳ್ಳತನಗೈದಿರುವ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ರಫತ್ ಕೌಸರ್ ಮರ್ತೂರ ಎಂಬುವರ 2 ಲಕ್ಷ 90 ಸಾವಿರ ಮೌಲ್ಯದ 94.75 ಗ್ರಾಂದ ತಾಳಿ ಚೈನ್, ಜುಮುಕಿ, ಕಿವಿಯೋಲೆಯನ್ನು ಸೇರಿದಂತೆ ವಿವಿಧ ಚಿನ್ನವನ್ನು ಕಳ್ಳತನ ಮಾಡಿದ್ದಾರೆ. ಇನ್ನು ಬಸ್ನಲ್ಲಿ ಬ್ಯಾಗ್ ಚೆಕ್ ಮಾಡಿದಾಗ ಚಿನ್ನ ಇರಲಿಲ್ಲ. ಅದಕ್ಕಾಗಿ ಕಳ್ಳರನ್ನು ಪತ್ತೆ ಮಾಡುವಂತೆ ದೂರು ನೀಡಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.